ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇದೇ ಮೊದಲ ಬಾರಿ ಭಾರತದಲ್ಲಿ ನಡೆಯಲಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯಗೊಳಿಸಲು ಒಂದು ಕಾರ್ಯಕ್ರಮದ ಯೋಜನೆ ಹಾಕಿಕೊಂಡಿದ್ದಾರೆ. ಭಾರತದ ಟೆಸ್ಟ್ ತಂಡವನ್ನು ಇಲ್ಲಿಯವರೆಗೆ ಮುನ್ನಡೆಸಿದ ನಾಯಕರನ್ನು ಈ ಪಂದ್ಯಕ್ಕೆ ಆಹ್ವಾನಿಸುವುದು ಮತ್ತು ಅವರಿಂದ ಕಾಮೆಂಟ್ರಿ ಮಾಡಿಸುವುದು ಅವರ ಯೋಜನೆ. ಇದರಿಂದಾಗಿ ಸ್ವತಃ ಸೌರವ್, ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್, ಸುನಿಲ್ ಗಾವಸ್ಕರ್, ಕಪಿಲ್ ದೇವ್ ಅವರಂತಹ ದಿಗ್ಗಜರನ್ನು ಒಂದೆಡೆ ಸೇರುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಧೋನಿ ಕೂಡ ಇದ್ದಾರೆ.